ಗೌರಿ ಹಬ್ಬದ ಸಮಯದಲ್ಲೇ ಗಣೇಶ ಹಬ್ಬವೂ ಬರುವುದರಿಂದ ಇದನ್ನು ಗೌರಿ ಗಣೇಶ ಹಬ್ಬ ಎಂದೂ ಕರೆಯಲಾಗುತ್ತದೆ. ಅದರಲ್ಲೂ ಮಹಿಳೆಯರು ಸಾಮಾನ್ಯವಾಗಿ ಸ್ವರ್ಣ ಗೌರಿ ವ್ರತವನ್ನು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಈ ಸ್ವರ್ಣ ಗೌರಿಯ ಪೌರಾಣಿಕ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ.
ಭಾದ್ರಪದ ಮಾಸದ ಆರಂಭದೊಂದಿಗೆ ಗೌರಿ ಹಬ್ಬವೂ ಬರುತ್ತದೆ. ಈ ಸಂದರ್ಭದಲ್ಲಿ ಮಳೆಯಿಂದ ನೆಂದ ಧರೆ ಬಸಿರಾಗಿ ಹಸಿರು ಬೆಳೆಯನ್ನು ಹೊರತರುತ್ತದೆ. ಹಾಗೆಂದೇ ಗೌರಿ ಪ್ರಕೃತಿ ಮಾತೆಯ ಸಂಕೇತ. ಆ ಕಾರಣ ಗೌರಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆಯೆಂದು ಪೂಜಿಸುತ್ತಾರೆ. ಪುರಾಣ ಕಥೆಯ ಪ್ರಕಾರ ಗೌರಿಯ ಸಂತಾನ ಸುಬ್ರಹ್ಮಣ್ಯ ಮತ್ತು ಗಣಪತಿ. ಶಿವನ ಗಣಗಳ ನಾಯಕನೇ ಗಣಪತಿ. ಅವನು ಇಚ್ಛಾಶಕ್ತಿಯ ಪ್ರತೀಕವಾಗಿದ್ದಾನೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ, ಗೌರಿ-ಗಣೇಶರ ಆರಾಧನೆಯಿಂದ ನಮ್ಮೊಳಗಿನ ಒರಟು ಗುಣಗಳನ್ನು ಗೆಲ್ಲುವ ಇಚ್ಛಾಶಕ್ತಿ ವೃದ್ಧಿಯಾಗುತ್ತದೆ. ಸುಬ್ರಹ್ಮಣ್ಯ, ಅಂದರೆ ಬ್ರಹ್ಮಜ್ಞಾನಿಯ ಸ್ಥಿತಿಯನ್ನು ಪಡೆಯಲು ಅನುಕೂಲವಾಗುತ್ತದೆ.
*ನಿರಾಕಾರ ಸ್ವರೂಪಿಣಿ*
ಸಂಸ್ಕೃತದಲ್ಲಿ ಗೌರಿ ಎಂದರೆ ಸುವರ್ಣ ಅಥವಾ ಬಿಳಿ ಬಣ್ಣವುಳ್ಳವಳು ಎಂದು. ಶ್ಯಾಮಲವರ್ಣೆಯಾದ ಪಾರ್ವತಿ ಶ್ರದ್ಧಾಭರಿತ ಸಾಧನೆಯಿಂದ ಗೌರವ ವರ್ಣವನ್ನು ಪಡೆದಳು ಎನ್ನುತ್ತಾರೆ. ಸಾಧನೆ ಚಿತ್ತಶುದ್ಧಿಯ ಸಂಕೇತವಾದರೆ ಅದುವೇ ಆತ್ಮ ಪರಮಾತ್ಮನ ಸಮ್ಮಿಲನಕ್ಕೆ ಕಾರಣವಾಗುತ್ತದೆ. ಮುಕ್ತಿಗೆ ಸೋಪಾನವಾಗುತ್ತದೆ. ಹಾಗೆಂದೇ ಗೌರಿ ನಿತ್ಯ ಸುಮಂಗಲಿ, ಭಾಗ್ಯದಾತೆಯಾಗಿ ಆರಾಧಿಸಲ್ಪಡುತ್ತಾಳೆ.
ಸಾಮಾನ್ಯವಾಗಿ ಗೌರಿ ಹಬ್ಬವನ್ನು ಗಣೇಶ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ. ಈ ಹಬ್ಬ ಗಣೇಶನ ತಾಯಿಯೆಂದು ಪೂಜಿಸಲ್ಪಡುವ ಗೌರಿ (ಪಾರ್ವತಿ) ಯ ಆಚರಣೆಯನ್ನು ಸಂಕೇತಿಸುತ್ತದೆ. ಇದನ್ನು ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಆಚರಿಸುತ್ತಾರೆ ಮತ್ತು ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಹತ್ವದ ಹಬ್ಬವಾಗಿದೆ. ಇದನ್ನು ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಛತ್ತೀಸ್ಗಢ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಹರ್ತಾಲಿಕಾ ಎಂದು ಕರೆಯಲಾಗುತ್ತದೆ.
ಗಣೇಶನ ತಾಯಿ ಮತ್ತು ಶಿವನ ಪತ್ನಿ ಗೌರಿ ತನ್ನ ಭಕ್ತರಿಗೆ ಧೈರ್ಯ ಮತ್ತು ಶಕ್ತಿಯನ್ನು ದಯಪಾಲಿಸುವ ಸಾಮರ್ಥ್ಯಕ್ಕಾಗಿ ಭಾರತದಾದ್ಯಂತ ಪೂಜಿಸಲ್ಪಡುತ್ತಾಳೆ. ಗೌರಿ ಆದಿ ಶಕ್ತಿ ಮಹಾಮಾಯನ ಅವತಾರ ಎಂಬ ನಂಬಿಕೆ ಇದೆ. ಗೌರಿ ಶಿವನ ಶಕ್ತಿ. ಯಾವುದೇ ವಿವಾಹಿತ ಮಹಿಳೆ ತನ್ನ ಹೆತ್ತವರ ಮನೆಗೆ ಬರುವಂತೆ ಭಾದ್ರಪಾದ ಮಾಸದ ಮೂರನೇ ದಿನ ಅಥವಾ ತದಿಗೆಯ ದಿನ ಗೌರಿ ಮನೆಗೆ ಬರುತ್ತಾರೆ ಎಂದು ನಂಬಲಾಗಿದೆ. ಮರುದಿನ ಗೌರಿಯ ಪುತ್ರ ಗಣೇಶ ಕೈಲಾಸ ಪರ್ವತಕ್ಕೆ ವಾಪಸ್ ಕರೆದುಕೊಂಡು ಹೋಗುವಂತೆ ಬರುತ್ತಾನೆ ಎಂದೂ ಹೇಳಲಾಗುತ್ತದೆ.
ಗಣೇಶನ ತಾಯಿ ಮತ್ತು ಶಿವನ ಪತ್ನಿ ಗೌರಿ ತನ್ನ ಭಕ್ತರಿಗೆ ಧೈರ್ಯ ಮತ್ತು ಶಕ್ತಿಯನ್ನು ದಯಪಾಲಿಸುವ ಸಾಮರ್ಥ್ಯಕ್ಕಾಗಿ ಭಾರತದಾದ್ಯಂತ ಪೂಜಿಸಲ್ಪಡುತ್ತಾಳೆ. ಗೌರಿ ಆದಿ ಶಕ್ತಿ ಮಹಾಮಾಯನ ಅವತಾರ ಎಂಬ ನಂಬಿಕೆ ಇದೆ. ಗೌರಿ ಶಿವನ ಶಕ್ತಿ. ಯಾವುದೇ ವಿವಾಹಿತ ಮಹಿಳೆ ತನ್ನ ಹೆತ್ತವರ ಮನೆಗೆ ಬರುವಂತೆ ಭಾದ್ರಪಾದ ಮಾಸದ ಮೂರನೇ ದಿನ ಅಥವಾ ತದಿಗೆಯ ದಿನ ಗೌರಿ ಮನೆಗೆ ಬರುತ್ತಾರೆ ಎಂದು ನಂಬಲಾಗಿದೆ. ಮರುದಿನ ಗೌರಿಯ ಪುತ್ರ ಗಣೇಶ ಕೈಲಾಸ ಪರ್ವತಕ್ಕೆ ವಾಪಸ್ ಕರೆದುಕೊಂಡು ಹೋಗುವಂತೆ ಬರುತ್ತಾನೆ ಎಂದೂ ಹೇಳಲಾಗುತ್ತದೆ.
ಈ ವೇಳೆ, ಶಿವನು ತನ್ನನ್ನು ಪ್ರೀತಿಸುವಂತೆ ತನ್ನ ಕಪ್ಪಾದ ಚರ್ಮವನ್ನು ತೆಗೆಯಬೇಕೆಂದು ಪಾರ್ವತಿ ಕೇಳಿಕೊಂಡಳು. ಬಳಿಕ ಬ್ರಹ್ಮನು ಕತ್ತಲೆಯನ್ನು ತೆಗೆದುಕೊಂಡು ಕಾಳಿ ದೇವಿಯನ್ನು ಸೃಷ್ಟಿಸಿದನು. ನಂತರ, ಪಾರ್ವತಿಗೆ ಚಿನ್ನದ ಚರ್ಮ ಸಿಕ್ಕ ಬಳಿಕ ಅವಳು ಗೌರಿ ದೇವಿಯಾದಳು. ಅವಳ ಚಿನ್ನದ ಬಣ್ಣದಿಂದಾಗಿ, ಅವಳು ಅಕ್ಕಿ ಮತ್ತು ಧಾನ್ಯದ ಸಂಕೇತವಾಗಿದ್ದಾಳೆ. ಫಲವತ್ತತೆ ದೇವತೆಯ ಪಾತ್ರವನ್ನು ಗೌರಿ ವಹಿಸುತ್ತಾಳೆ.
ಶಿವನನ್ನು ಪೂಜೆ ಮಾಡುತ್ತಿದ್ದ ಗೌರಿ
ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗೌರಿ ಪೂಜೆ ಒಂದು ಪ್ರಮುಖ ಆಚರಣೆಯಾಗಿದೆ. ವಿವಾಹಿತ ಮಹಿಳೆಯರು ಗೌರಿ ದೇವಿಯನ್ನು ಸಿಂಧೂರ ಅಥವಾ ಕುಂಕುಮದೊಂದಿಗೆ ತಮ್ಮ ಸೌಭಾಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಸದ್ಗುಣಶೀಲ ಗಂಡಂದಿರನ್ನು ಪಡೆಯುವ ಸಲುವಾಗಿ ಅವಿವಾಹಿತ ಯುವತಿಯರು ಗೌರಿಯನ್ನು ಪೂಜಿಸುತ್ತಾರೆ.
ಅಲ್ಲದೆ ಪುರಾಣಗಳ ಪ್ರಕಾರ, ಗೌರಿಯು ದೈವಿಕ ತಾಯಿ ಮತ್ತು ಬ್ರಹ್ಮಾಂಡದ ಮೂಲ. ಮಾತೃ ದೇವತೆ, ಶಕ್ತಿ ದೇವತೆ ಶ್ರೀ ರಾಜ ರಾಜೇಶ್ವರಿ, ಗೌರಿ ದೇವತೆ, ಲಲಿತಾ ತ್ರಿಪುರ ಸುಂದರಿ ದೇವಿ ಮುಂತಾದ ವಿವಿಧ ಆಕಾಶ ಅಭಿವ್ಯಕ್ತಿಗಳನ್ನು ಹೊಂದಿದೆ.
ಕೃಪೆ : ಅಂತರ್ಜಾಲ
